About Me

My photo
kalaburagi, karnataka, India
somalingmuppar kawalga economics

Sunday, September 8, 2024

International Literacy Day 2024 : ವಿಶ್ವದಲ್ಲೇ ಅತೀ ಕಡಿಮೆ ಸಾಕ್ಷರತೆಯನ್ನು ಹೊಂದಿರುವ ದೇಶಗಳಿವು

ಸೆಪ್ಟೆಂಬರ್ 08 ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.1966ರಲ್ಲಿ ಯುನೆಸ್ಕೋ ಜನರಲ್ ಕಾನ್ಫರೆನ್ಸ್‌ನಲ್ಲಿ ಸೆಪ್ಟೆಂಬರ್ 8 ನ್ನು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಘೋಷಣೆ ಮಾಡಿತು, ಅಂದಿನಿಂದ ಈ ಆಚರಣೆಯೂ ಜಾರಿಯಲ್ಲಿದೆ.


ಹಾಗಾದ್ರೆ ಈ ದಿನದ ಕುರಿತಾದ ಮಾಹಿತಿ ಇಲ್ಲಿದೆ.

ಪ್ರತಿಯೊಬ್ಬ ವ್ಯಕ್ತಿಯ ಘನತೆ ಹಾಗೂ ವೈಯುಕ್ತಿಕ ಹಕ್ಕಾಗಿರುವ ಶಿಕ್ಷಣವು ವೈಯಕ್ತಿಕ ಬೆಳವಣಿಗೆಗೆ ಬಹಳ ಅಗತ್ಯವಾಗಿದೆ. ಅದಲ್ಲದೇ, ದೇಶದ ಅಭಿವೃದ್ಧಿಯಲ್ಲಿ ಸಾಕ್ಷರತೆಯ ಪಾತ್ರ ಅಗಾಧವಾದದ್ದು. ದೇಶದ ನಾಗರಿಕರು ಹೆಚ್ಚು ಸಾಕ್ಷರತಾರಾಗಿದ್ದರೆ, ದೇಶವು ಪ್ರಗತಿಯತ್ತ ಸಾಗಲು ಸಾಧ್ಯವಾಗುತ್ತದೆ. ಹೀಗಾಗಿ ಈ ಶಿಕ್ಷಣದ ಈ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸಾಕ್ಷರತೆಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಸೆಪ್ಟೆಂಬರ್ 8 ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ.


ಅಂತಾರಾಷ್ಟ್ರೀಯ ಸಾಕ್ಷರತಾ ದಿನದ ಇತಿಹಾಸ ಹಾಗೂ ಮಹತ್ವ:


ಯುನೆಸ್ಕೋ ಮೊದಲ ಬಾರಿಗೆ ನವೆಂಬರ್ 7, 1965 ರಲ್ಲಿ ವಿಶ್ವ ಸಾಕ್ಷರತಾ ದಿನವನ್ನು ಆಚರಿಸಬೇಕೆಂದು ನಿರ್ಧರಿಸಿತು. ಪ್ರಪಂಚದಿಂದ ಅನಕ್ಷರತೆಯ ಪ್ರತಿಯೊಂದು ಕುರುಹುಗಳನ್ನು ತೆಗೆದುಹಾಕುವ ನಿಟ್ಟಿನಲ್ಲಿ ಹಾಗೂ ಪ್ರತಿಯೊಂದು ದೇಶದ ಅಭಿವೃದ್ಧಿಗೆ ಶಿಕ್ಷಣದ ಮಹತ್ವ ಎಷ್ಟು ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್ 26, 1966 ರಂದು ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ತನ್ನ 14 ನೇ ಸಾಮಾನ್ಯ ಸಮ್ಮೇಳನದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 8 ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಿತು.

ತದನಂತರದಲ್ಲಿ ಸೆಪ್ಟೆಂಬರ್ 8, 1966 ರಂದು ವಿಶ್ವವು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಯಿತು. ಜಗತ್ತಿನ ಹಲವು ದೇಶಗಳು ಇದರಲ್ಲಿ ಪಾಲ್ಗೊಂಡು ಜನಸಾಮಾನ್ಯರಿಗೆ ಶಿಕ್ಷಣ ನೀಡುವ ಪ್ರತಿಜ್ಞೆ ಸ್ವೀಕರಿಸಿದರು. ಜನರನ್ನು ಸಾಕ್ಷರರನ್ನಾಗಿಸಲು, ಸಾಮಾಜಿಕ ಹಾಗೂ ಮಾನವ ಅಭಿವೃದ್ಧಿಗಾಗಿ ಅವರ ಹಕ್ಕುಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಯುನೆಸ್ಕೋ ಹಾಗೂ ಅನೇಕ ದೇಶಗಳ ಸರ್ಕಾರಿ ಮತ್ತು ಸರ್ಕಾರೇತ್ತರ ಸಂಸ್ಥೆಗಳು, ಶಾಲೆಗಳು, ಕಾಲೇಜುಗಳು ಹಾಗೂ ಸಮುದಾಯಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.


ಸಾಕ್ಷರತೆಯಲ್ಲಿ ಹಿಂದುಳಿದಿರುವ ವಿಶ್ವದ ದೇಶಗಳ ಬಗೆಗಿನ ಮಾಹಿತಿ:


ದಕ್ಷಿಣ ಸುಡಾನ್ :ಆಫ್ರಿಕಾದಲ್ಲಿರುವ ಈ ದಕ್ಷಿಣ ಸುಡಾನ್ ಸಾಕ್ಷರತೆ ಪ್ರಮಾಣವು ಶೇಕಡಾ 27 ರಷ್ಟಿದ್ದು, ಜುಲೈ 9, 2011 ರಂದು ಸುಡಾನ್‌ನಿಂದ ಬೇರ್ಪಟ್ಟಿದೆ. ಬಡದೇಶಗಳಲ್ಲಿ ಒಂದಾಗಿರುವ ಇಲ್ಲಿ ಸುಮಾರು ಮೂರನೇ ಎರಡರಷ್ಟು ಜನರು ಮಾನವೀಯ ನೆರವಿನ ಮೇಲೆ ಅವಲಂಬಿತರಾಗಿದ್ದು, ಇಲ್ಲಿ ಕಡಿಮೆ ಸಾಕ್ಷರತೆಯ ಜೊತೆಗೆ ಆಹಾರದ ಕೊರತೆಯನ್ನು ಕಾಣಬಹುದು.

ಅಫ್ಘಾನಿಸ್ತಾನ : 2021 ರ ಆಗಸ್ಟ್ ನಲ್ಲಿ ತಾಲಿಬಾನ್ ಎಂಬ ಭಯೋತ್ಪಾದಕ ಸಂಘಟನೆಯು ಇಡೀ ದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಇದರೊಂದಿಗೆ ಅಲ್ಲಿ ಶರಿಯಾ ಕಾನೂನನ್ನು ಜಾರಿಗೆ ತರಲಾಗಿದೆ. ಇಲ್ಲಿನ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿರುವ ಕಾರಣ ಮಹಿಳೆಯರು ಹಾಗೂ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ.

ನೈಜರ್ : ಪಶ್ಚಿಮ ಆಫ್ರಿಕಾದಲ್ಲಿರುವ ಈ ನೈಜರ್ ಮಹಿಳೆಯರು ವಿಶ್ವದಲ್ಲೇ ಅತಿ ಹೆಚ್ಚು ಮಗುವನ್ನು ಹೇರುವವರಲ್ಲಿ ಮೊದಲಿಗರಿದ್ದಾರೆ. ನೈಜರ್ ಅತ್ಯಂತ ಬಡ ದೇಶವಾಗಿದ್ದು, ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಲಾಗುತ್ತದೆ. ಅದಲ್ಲದೇ, ಇಲ್ಲಿನ ಮಹಿಳೆಯರು ಮಕ್ಕಳನ್ನು ಹೇರುವ ಕಾರಣ ಆ ಮಕ್ಕಳಿಗೆ ಉತ್ತಮ ಶಿಕ್ಷಣವಾಗಲೀ, ಇತರೆ ಮೂಲ ಸೌಕರ್ಯವಾಗಲಿ ಸಿಗುತ್ತಿಲ್ಲ.

ಮಾಲಿ : ಪಶ್ಚಿಮ ಆಫ್ರಿಕಾದಲ್ಲಿರುವ ಈ ಮಾಲಿ ಪ್ರದೇಶದ ಶಿಕ್ಷಣದ ಮಟ್ಟವು ತುಂಬಾನೇ ಕಳಪೆಯಾಗಿದೆ. ಇಲ್ಲಿನ ಹುಡುಗಿಯರಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗುವ ಒತ್ತಡದಲ್ಲಿ ಇರುವುದರಿಂದ ಶಾಲೆ ಬಿಡುವ ಅಪಾಯ ಹೆಚ್ಚಾಗಿರುತ್ತದೆ. ಹೀಗಾಗಿ ಇಲ್ಲಿನ ಸಾಕ್ಷರತಾ ಪ್ರಮಾಣವು ಶೇಕಡಾ 35 ಕ್ಕಿಂತ ಕಡಿಮೆಯೇ ಇದೆ.

ಸೊಮಾಲಿಯಾ : ವಿಶ್ವದ 60 ಬಡ ದೇಶಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸೊಮಾಲಿಯಾ ಪೂರ್ವ ಆಫ್ರಿಕಾದಲ್ಲಿರುವ ಈ ಪ್ರದೇಶವು ಸಾಕ್ಷರತಾ ಪ್ರಮಾಣದಲ್ಲಿ ಕುಸಿದಿದೆ. ಎರಡು ದಶಕಗಳಿಂದ ಅಂತರ್ಯುದ್ಧದ ಭೀಕರ ಪರಿಣಾಮಗಳನ್ನು ಅನುಭವಿಸಿದ ಸೊಮಾಲಿಯಾದಲ್ಲಿ ಶಿಕ್ಷಣ ಮೂಲಸೌಕರ್ಯವೇ ಇಲ್ಲದಂತಾಗಿದೆ.

ವಿಶ್ವದ ಅತಿ ದೊಡ್ಡ ಗಣೇಶನ ಪ್ರತಿಮೆ ಎಲ್ಲಿದೆ ಗೊತ್ತಾ.? ತಿಳಿಯಿರಿ |World's largest Ganesha Statue

ವಿಶ್ವದ ಅತಿದೊಡ್ಡ ಗಣೇಶ ವಿಗ್ರಹ ನಮ್ಮ ದೇಶದಲ್ಲಿದೆ . ಹೌದು, ಗಣೇಶನ ಪ್ರತಿಮೆ ಇರುವ ಸ್ಥಳವು ಥೈಲ್ಯಾಂಡ್ನ ಚಚೊಯೆಂಗ್ಸಾವೊ ಪ್ರಾಂತ್ಯವಾಗಿದೆ ಎಂಬುದು ಗಮನಾರ್ಹವಾಗಿದೆ. ಈಪ್ರದೇಶದಲ್ಲಿ ಒಟ್ಟು ಎರಡು ವಿಗ್ರಹಗಳಿವೆ ಮತ್ತು ಈ ಎರಡು ವಿಗ್ರಹಗಳು ವಿಶ್ವದ ಅತಿದೊಡ್ಡ ವಿಗ್ರಹಗಳಾಗಿವೆ. ಈ ಪ್ರದೇಶದಲ್ಲಿ ವಾಸಿಸುವ ಬೌದ್ಧರು ವಿನಾಯಕ ಚತುರ್ಥಿ ಹಬ್ಬವನ್ನು ಸಹ ಆಚರಿಸುತ್ತಾರೆ.

ಈ ಪ್ರತಿಮೆಗಳಲ್ಲಿ ಒಂದು 49 ಮೀಟರ್ ಎತ್ತರ ಮತ್ತು 19 ಮೀಟರ್ ಅಗಲವಿದ್ದರೆ, ಇನ್ನೊಂದು 98 ಅಡಿ ಎತ್ತರವಿದೆ. ನವರಾತ್ರಿಯ ಸಮಯದಲ್ಲಿಯೂ ಅನೇಕ ಭಕ್ತರು ಗಣೇಶನನ್ನು ಭೇಟಿ ಮಾಡಲು ಆಸಕ್ತಿ ತೋರಿಸುತ್ತಾರೆ. ಮತ್ತೊಂದೆಡೆ, ಇಂದು ವಿನಾಯಕ ಚತುರ್ಥಿಯ ಹಬ್ಬವಾಗಿದೆ ಮತ್ತು ನಾವು ವಿನಾಯಕನನ್ನು ಭಕ್ತಿಯಿಂದ ಪೂಜಿಸಿದರೆ, ನಮಗೆ ವಿನಾಯಕನ ಅನುಗ್ರಹ ಸಿಗುತ್ತದೆ ಎಂದು ಹೇಳಬಹುದು.

ಪಂಡಿತರು ಸೂಚಿಸಿದ ಸಮಯದಲ್ಲಿ ಗಣೇಶನನ್ನು ಪೂಜಿಸುವುದು ಶುಭ ಫಲಿತಾಂಶಗಳನ್ನು ತರುತ್ತದೆ. ನೀವು ಗಣೇಶನನ್ನು ಭಕ್ತಿಯಿಂದ ಪೂಜಿಸಿದರೆ, ಗಣೇಶನು ಎಲ್ಲಾ ಆಶೀರ್ವಾದಗಳನ್ನು ನೀಡುತ್ತಾನೆ. ಮುಂಜಾನೆ ಸ್ನಾನ ಮಾಡಿ ಗಣೇಶನನ್ನು ಪೂಜಿಸುವುದು ಉತ್ತಮ. ಶ್ಲೋಕಗಳನ್ನು ಪಠಿಸುವಾಗ ಗಣೇಶನನ್ನು ಪೂಜಿಸುವ ಮೂಲಕ ದೈವಿಕ ಆಶೀರ್ವಾದವನ್ನು ಪಡೆಯುವ ಸಾಧ್ಯತೆಯಿದೆ. ವಿನಾಯಕನನ್ನು ಪೂಜಿಸುವ ಭಕ್ತರು ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅನೇಕ ಭಕ್ತರು ಗಣೇಶನನ್ನು ಆಸೆಯನ್ನು ಪೂರೈಸುವ ದೇವರು ಎಂದು ಪರಿಗಣಿಸುತ್ತಾರೆ. ನೀವು ಯಾವುದೇ ತಪ್ಪುಗಳನ್ನು ಮಾಡದೆ ಗಣೇಶನನ್ನು ಪೂಜಿಸಿದರೆ, ವೃತ್ತಿಜೀವನದ ದೃಷ್ಟಿಯಿಂದಲೂ ಬೆಳೆಯಲು ಖಂಡಿತವಾಗಿಯೂ ಅವಕಾಶಗಳಿವೆ ಎಂದು ಹೇಳಬಹುದು

ಖಾಲಿ ಹೊಟ್ಟೆಗೆ ಈ ನೀರು ಕುಡಿದರೆ 1 ತಿಂಗಳು ನಾರ್ಮಲ್‌ ಇರುತ್ತದೆ ಬ್ಲಡ್‌ ಪ್ರೆಶರ್ !

ಆಮ್ಲಾ ಜ್ಯೂಸ್: ಆಮ್ಲಾ ನೈಸರ್ಗಿಕ ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಪ್ರತಿದಿನ ಆಮ್ಲಾ ಜ್ಯೂಸ್ ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು.

ತೆಂಗಿನ ನೀರು: ತೆಂಗಿನ ನೀರು ನೈಸರ್ಗಿಕವಾಗಿ ಪೋಷಕಾಂಶಗಳಿಂದ ತುಂಬಿರುತ್ತದೆ. ಇದು ಎಲೆಕ್ಟ್ರೋಲೈಟ್‌ಗಳಲ್ಲಿ ವಿಶೇಷವಾಗಿ ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ. ಪೊಟ್ಯಾಸಿಯಮ್ ರಕ್ತನಾಳಗಳಲ್ಲಿನ ಸೋಡಿಯಂ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಒಂದು ಲೋಟ ತೆಂಗಿನ ನೀರನ್ನು ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಬೀಟ್ರೂಟ್ ರಸ: ಬೀಟ್ರೂಟ್ ನಲ್ಲಿ ನೈಟ್ರೈಟ್ ಎಂಬ ವಸ್ತುವಿದ್ದು, ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಯಾಗುತ್ತದೆ. ನೈಟ್ರಿಕ್ ಆಕ್ಸೈಡ್ ರಕ್ತನಾಳಗಳನ್ನು ಹಿಗ್ಗಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ. ಇದು ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ. ಪ್ರತಿದಿನ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡಬಹುದು.

ಪುದೀನಾ ರಸ: ಪುದೀನಾ ನೈಸರ್ಗಿಕ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದೆ. ಪುದೀನಾ ರಸವು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದನ್ನು ತಯಾರಿಸಲು, ಪುದೀನಾ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯಬಹುದು

ಪೇರಲ ರಸ: ಪೇರಲ ವಿಟಮಿನ್ ಸಿ, ಫೈಬರ್ ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ರಕ್ತನಾಳಗಳಿಗೆ ವಿಶ್ರಾಂತಿ ನೀಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪೇರಲ ರಸವನ್ನು ಪ್ರತಿದಿನ ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು.

ಕೆನೆ ತೆಗೆದ ಮಜ್ಜಿಗೆ: ಇದು ದೇಹಕ್ಕೆ ಶಕ್ತಿ ನೀಡುತ್ತದೆ. ಇದನ್ನು ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಈ ಮಜ್ಜಿಗೆಯಲ್ಲಿರುವ ಪ್ರೋಬಯಾಟಿಕ್ಸ್ ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

ದಾಲ್ಚಿನ್ನಿ ನೀರು: ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ದಾಲ್ಚಿನ್ನಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ರಕ್ತನಾಳಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ದಿನಕ್ಕೆ ಒಂದು ಬಾರಿ ದಾಲ್ಚಿನ್ನಿ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು.

ಶುಂಠಿ ರಸ: ಶುಂಠಿಯು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಪ್ರತಿದಿನ ಶುಂಠಿ ಟೀ ಅಥವಾ ಶುಂಠಿ ರಸವನ್ನು ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

International Literacy Day 2024 : ವಿಶ್ವದಲ್ಲೇ ಅತೀ ಕಡಿಮೆ ಸಾಕ್ಷರತೆಯನ್ನು ಹೊಂದಿರುವ ದೇಶಗಳಿವು

ಸೆಪ್ಟೆಂಬರ್ 08 ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.196...